Wednesday, January 9, 2013

ಹಳ್ಳಿದಿಲ್ಲಿಗಳ ಸಮನ್ವಯ

ಪ್ರತಿಯೊಂದು ಜೀವಿಯು ಆತ್ಮಗೌರವದೊಂದಿಗೆ ಬಾಳುವ ಅವಕಾಶವಿರುವ ಆಡಳಿತವೇ ರಾಮರಾಜ್ಯ. ಆಧುನಿಕ ಗ್ರಾಮಗಳು ಸ್ವಾವಲಂಬೀ ಸುಖೀ ಗ್ರಾಮಗಳು ಮತ್ತು ಪಟ್ಟಣನಗರಗಳು ನೆಮ್ಮದಿಯ ತಾಣಗಳು ಆಗುಳಿಯಬೇಕಾದರೆ ಶ್ರೀರಾಮನ ಆದರ್ಶಗಳು ಹಾಗೂ ರಾಮರಾಜ್ಯದ ಕಲ್ಪನೆಯು ಅನುಷ್ಠಾನಗೊಳ್ಳಬೇಕಾಗುತ್ತದೆ. ಹಿಂದೆ ಗ್ರಾಮಗಳಲ್ಲಿ ಹಲವು ಬಗೆಯ ಕೃಷಿಕಾರ್ಯಗಳು, ಕೌಶಲಗಳು, ಇದ್ದವು. ಹಳ್ಳಿಯ ಹೊಲ, ಗದ್ದೆ, ಕಾಡುಗಳು, ಜಾನುವಾರುಗಳಿಗೆ ಸಮೃದ್ಧಮೇವನ್ನು ಒದಗಿಸಿಕೊಡುತ್ತಿದ್ದವು. ಗ್ರಾಮೀಣರ ಬದುಕು ಸ್ವಾಭಿಮಾನದ ಸ್ವಾವಲಂಬನದ ಸಹಕಾರದ ಪ್ರತೀಕವಾಗಿತ್ತು. ಇಂದು ಪರಿಸ್ಥಿತಿಯು ಪೂರ್ಣ ಬದಲಾಗಿದೆ. ಕೃಷಿ ಹೈನುಗಾರಿಕೆಗಳು ವಾಣಿಜ್ಯ ಸ್ವರೂಪವನ್ನು ಪಡೆದಿವೆ. ಕೈಗಾರಿಕೆಯ ಕ್ರಾಂತಿಯ ಮತ್ತು ವೈಜ್ಞಾನಿಕ ಸಂಶೋಧನೆಗಳ ಪರಿಣಾಮವಾಗಿ ಗ್ರಾಮೀಣಜೀವನವು ನಗರಾವಲಂಬಿಯಾಗಿದೆ. ತಾವು ಉಣ್ಣುವುದನ್ನು ತಾವೇ ಉತ್ತಿ ಬಿತ್ತಿ ಬೆಳಯುತ್ತಿದ್ದ ಕೃಷಿಕರು ಬಿತ್ತನೆಯ ಬೀಜಕ್ಕೂ ನಗರದ ಅಂಗಡಿಗಳ ಕಡೆ ನೋಡುವಂತಾಗಿದೆ. ಮಣ್ಣಿನ ಮಕ್ಕಳ, ಜಾನುವಾರುಗಳ ಮೌಲ್ಯಗಳು ಮತ್ತು ಗ್ರಾಮೀಣ ಸೊಗಡು ಅಪಾಯದ ಅಂಚಿನಲ್ಲಿವೆ. ಇನ್ನು ನಗರವಾಸಿಗಳ ಜೀವನವು ಯಾಂತ್ರಿಕವೂ ವಿಷಪೂರಿತವೂ ಆಗಿದೆ. ಉಸಿರಾಡುವಗಾಳಿ, ಕುಡಿಯುವನೀರು, ಉಣ್ಣುವ ಆಹಾರ ಎಲ್ಲವೂ ನಿಧಾನವಿಷವಾಗಿದೆ. ಮಧ್ಯವರ್ತಿಗಳ ಅತಿಯಾಸೆಯಿಂದಾಗಿ ಕಲುಷಿತ ಕಲಬೆರಕೆ ವಸ್ತುಗಳೂ ದುಬಾರಿಯಾಗಿವೆ. ಸಣ್ಣ ಆದಾಯದ ಸಂಸ್ಕಾರಯುತ ಕುಟುಂಬಗಳ ಜೀವನನಿರ್ವಹಣೆಯೇ ಹೋರಾಟವಾಗಿದೆ. ಕೃಷಿಕನು ಪ್ರಕೃತಿಮಾತೆಯ ಸೇವಕ. ಕೃಷಿಸೇವೆ ಇತರ ಎಲ್ಲಾ ಸೇವೆಗಳಿಗಿಂತ ಶ್ರೇಷ್ಠ ಮತ್ತು ಗೌರವಯುತ ಎಂಬ ಭಾವನೆ ಭಾರತೀಯರಲ್ಲಿ ಇನ್ನೂ ಅಳಿದಿಲ್ಲ. ಒಕ್ಕಲಿಗನೊಕ್ಕದಿರೆ ಬಿಕ್ಕುವುದು ಜಗವೆಲ್ಲ ಎಂಬ ನಾಣ್ಣುಡಿಯು ನೇಗಿಲಾಶ್ರಯದಲ್ಲಿ ನಮ್ಮ ನಾಗರಿಕತೆಯು ಬದುಕಿತ್ತು ಎಂಬ ಸತ್ಯದರ್ಶನವನ್ನು ಮಾಡಿಸುತ್ತದೆ. ಪ್ರಕೃತಿಯೊಂದಿಗೆ ಸಾಮರಸ್ಯದಲ್ಲಿ ಬದುಕುವ ಕಾಲವು ಕಳೆದುಹೋಗಿ ವಿರಸದೊಂದಿಗೆ ಜೀವನ್ಮರಣದ ಸ್ಥಿತಿಗೆ ಬಂದ ಈ ಕಾಲಘಟ್ಟದಲ್ಲಿ ನಾವು ಎಚ್ಚತ್ತುಕೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ. ಒಟ್ಟಿನಲ್ಲಿ ಹಳ್ಳಿಮತ್ತು ನಗರದ ಬದುಕಿನ ನಡುವೆ ಕಂದರವುಂಟಾಗಿದೆ. ಈ ಬದುಕಿನ ಬಾಂಧವ್ಯವನ್ನು ಬೆಸೆಯುವ ಸೇತು ನಿರ್ಮಾಣವಾಗಬೇಕಿದೆ.
ಆ ನಿಟ್ಟಿನಲ್ಲಿ ಪರಿಹಾರೋಪಾಯಗಳನ್ನು ಯೋಚಿಸಿ ರೂಪಿಸಿದ ಯೋಜನೆಯೇ ಈ ಗ್ರಾಮರಾಜ್ಯ. ಗ್ರಾಮಗಳಲ್ಲಿ ಬೆಳೆದ ದವಸಧಾನ್ಯಗಳು, ಹಣ್ಣುತರಕಾರಿಗಳು, ಇವೆಲ್ಲ ವಾಣಿಜ್ಯೀಕರಣದಿಂದ ನಗರವನ್ನು ಸೇರುತ್ತವೆ. ನಗರದ ಸಿದ್ಧಾಹಾರಗಳು ಝಂಕ್‌ ತಿನಿಸುಗಳು ಗ್ರಾಮಕ್ಕೆ ಬರುತ್ತವೆ.
ಈ ಎರಡೂ ಸಂದರ್ಭಗಳಲ್ಲಿ ಮುಗ್ಧಗ್ರಾಹಕರ ಶೋಷಣೆಯು ನಡೆಯುತ್ತದೆ. ನಮ್ಮ ಪಕ್ಕದ ಮನೆಯ ಕೊಟ್ಟಿಗೆಯಲ್ಲಿ ಆಕಳು ಹೈನಾದರೂ ನಮ್ಮ ಮನೆಗೆ ಪ್ಯಾಕೆಟ್ ಹಾಲು ಬರುತ್ತದೆ.
ಈ ಎಲ್ಲ ವಿಪರ್ಯಾಸಗಳನ್ನು ಹೋಗಲಾಡಿಸಿ ಗ್ರಾಮೀಣರ ಬದುಕನ್ನು ಹಸಿರಾಗಿಸುವುದು, ನಾಗರಿಕರ ಜೀವನವನ್ನು ಹಸನಾಗಿಸುವದು ಈ ಗ್ರಾಮರಾಜ್ಯಯೋಜನೆಯ ಮೂಲೋದ್ದೇಶ.
ಯೋಜನೆಯ ಸ್ವರೂಪ :
  •   ಪ್ರತಿಕುಟುಂಬವೂ ಆರಂಭಿಕ ಸದಸ್ಯವನ್ನು ಹೊಂದಬೇಕು.
  • ಪ್ರತಿತಿಂಗಳು ಕುಟುಂಬಕ್ಕೆ ಬೇಕಾಗುವ ಆಹಾರ-ದಿನಸಿಗಳ ಪಟ್ಟಿಯಲ್ಲಿ ಗುರುತಿಸಿ ಹಣನೀಡುವುದು.
  • ಎರಡು ದಿನಗಳಲ್ಲಿ ಬಯಸಿದ ವಸ್ತುಗಳನ್ನು ಮನೆಯಲ್ಲಿಯೇ ಪಡೆಯುವುದು.
  • ಗ್ರಾಮಗಳಲ್ಲಿ ಬೆಳೆದ ಕೃಷ್ಯುತ್ಪನ್ನಗಳ ಸಕಾಲದಲ್ಲಿ, ಸರಿಯಾದಮೌಲ್ಯಕ್ಕೆ ವಿಕ್ರಯ.
ಯೋಜನೆಯ ಉದ್ದೇಶ :
  • ಕೃಷಿ ಮತ್ತು ಕೃಷ್ಯವಲಂಬಿತ ಉದ್ಯೋಗಗಳನ್ನು ಪ್ರೋತ್ಸಾಹಿಸುವುದು.
  • ಗ್ರಾಹಕವಸ್ತುಗಳ ಸಂಗ್ರಹ ಮತ್ತು ವಿಲೇವಾರಿ.
  • ಗವ್ಯೋತ್ಪನ್ನಗಳ ಸಂಗ್ರಹ ಮತ್ತು ವಿಲೇವಾರಿ.
  • ಕೃಷಿಕರ್ಮ ತರಬೇತಿ, ಮತ್ತು ಪರಿಣಿತ ಕರ್ಮಚಾರಿಗಳ ಸೌಲಭ್ಯ.
  • ಭಾರತೀಯಗೋತಳಿಗಳನ್ನು ಅಭಿವೃದ್ಧಿಪಡಿಸುವುದು.
  • ಸಾವಯವ ಕೃಷಿಪದ್ಧತಿಯ ಅಳವಡಿಕೆ ಪ್ರೋತ್ಸಾಹ.
  • ವಿವಿಧ ಕೌಶಲಗಳ ತರಬೇತು ಮತ್ತು ಸಮೂಹವಿಮಾ ಯೋಜನೆ.
  • ಗೃಹೋಪಯೋಗಿ ವಸ್ತುಗಳ ಮೌಲ್ಯವರ್ಧನೆ ಮತ್ತು ಮಾರಾಟ.
  • ಸೌರಶಕ್ತಿ, ಮರುಬಳಕೆಯ ಇಂಧನ ಯೋಜನೆ, ಗೋಬರ್ ಅನಿಲ, ಕಿರುವಿದ್ಯುದುತ್ಪಾದನೆಯ ಪ್ರೋತ್ಸಾಹ,
  • ಗ್ರಾಮೀಣ ಕುಟುಂಬಗಳ ಸರ್ವವಿಧ ಅಗತ್ಯಗಳನ್ನು ಪೂರೈಸುವುದು.
  • ಕೃಷಿತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದು.
  • ಗೃಹೋಪಯೋಗಿ ವಸ್ತುಗಳ ಸಮರ್ಪಕ ಬಳಕೆಯ ಕುರಿತು ಮಹಿಳೆಯರಿಗೆ ತರಬೇತಿ.
  • ಗ್ರಾಮ್ಯೋತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರಾಟವ್ಯವಸ್ಥೆ ಕಲ್ಪಿಸುವುದು.
  • ವಲಯ/ಮಂಡಲಸೂಚಿತ ಸ್ವಸಹಾಯಗುಂಪುಗಳಿಗೆ ಯೋಜನೆಯ ಅನುಷ್ಠಾನಕ್ಕೆ ಆರ್ಥಿಕ ಸಹಾಯ.
  • ಯೋಜನೆಯ ಉದ್ದೇಶ ಸಾಫಲ್ಯಕ್ಕಾಗಿ ದೇಶವಿದೇಶದ ವಿಶ್ವವಿದ್ಯಾಲಯಗಳ, ಸಂಘಸಂಸ್ಥೆಗಳ ಜೊತೆಗೆ ತರಬೇತಿ ಮತ್ತು ಕಾರ್ಯಕ್ರಮಗಳ ವಿನಿಮಯ.
  • ಪಟ್ಟಣ-ನಗರವಾಸಿಗಳಿಗೆ ಸೂಕ್ತಬೆಲೆಗೆ, ಸರಿಯಾದ ಮಾಪನದ, ಯೋಗ್ಯ ಕೃಷಿ ಹಾಗೂ ಕೃಷಿಯೇತರ ಉತ್ಪಾದನೆಗಳನ್ನು ಒದಗಿಸುವುದು.
  • ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವುದು.
  • ಸಮಾಜದ ಗ್ರಾಹಕರಮೇಲಿನ ದೌರ್ಜನ್ಯ ನಿವಾರಣೆ.
  • ಸಮಾಜಬಂಧುಗಳ ಸರಕು ಸಾಗಣೆ ಮತ್ತು ಪ್ರಯಾಣವೆಚ್ಚ ಕಡಿಮೆಗೊಳಿಸುವುದು.
ಸದಸ್ಯರಿಗೆ ಯೋಜನೆಯ ಪ್ರಯೋಜನಗಳು :
  • ಅಗತ್ಯವಸ್ತುಗಳನ್ನು ಮನೆಯಲ್ಲಿಯೇ ಪಡೆಯುವ ಸೌಕರ್ಯ.
  • ಆಹಾರದಿನಸಿ ಖರೀದಿಯಲ್ಲಿ ೧೫-೨೦% ಹಣದ ಉಳಿತಾಯ.
  • ಸಕಾಲದಲ್ಲಿ, ಸರಿಯಾದವಸ್ತುಗಳು, ಸಮರ್ಪಕತೂಕ ಅಳತೆಯಲ್ಲಿ, ಯೋಗ್ಯಬೆಲೆಗೆ ಕ್ರಯ ವಿಕ್ರಯ.
  • ಹಳ್ಳಿಗಳ ವೃದ್ಧರು ನಿಶ್ಚಿಂತೆಯಿಂದ ಕುಟುಂಬನಿರ್ವಹಿಸಬಹುದು.
  • ಸಣ್ಣಪುಟ್ಟ ಹಿಡುವಳಿ ರೈತರಿಗೆ ಪಟ್ಟಣದ ತಿರುಗಾಟವ್ಯಯದಿಂದ ಮುಕ್ತಿ.
  • ನಗರದ ಗ್ರಾಹಕರಿಗೆ ಗ್ರಾಮೋತ್ಪನ್ನಗಳು ಮತ್ತು ಶುದ್ಧ ಆಹಾರವಸ್ತುಗಳ ಪ್ರಾಪ್ತಿ.
  • ಗೃಹೋದ್ಯಮದಿಂದ ಮಹಿಳೆಯರಿಗೆ ಅಗತ್ಯ ಆದಾಯ.

Monday, September 10, 2012

ದೂ ದ ಉವಾಚ

ದೂರದರ್ಶನ ಉವಾಚ

ದೂರದನು ತೋರುವೆನು ದೂರದೆ ಕಾಣಣ್ಣ,
ಒಳಿತುಕೆಡುಕನು ಅರಿಯೆ ತಿಳಿದು ನೀ ನೋಡಣ್ಣ.

ದೂರಸ್ಥಂ ದರ್ಶಯಾಮೀಹ ಯೋಗ್ಯಾಯೋಗ್ಯಮಚಿಂತಿತಮ್ |
ಮುಖಂ ಮಮ ಸರ್ವಾಕರ್ಷಂ ಸ್ತೂಯತೇ ದೂರದರ್ಶನಮ್ ||

ಅನಂತ ವಿಶ್ವದಲ್ಲೆಲ್ಲೋ ಅವ್ಯಕ್ತವಾಗಿದ್ದ ನನ್ನಾತ್ಮವನ್ನು ಸಾಕಾರಗೊಳಿಸಿದ್ದು ಪಶ್ಚಿಮದೇಶದ ಜಾನ್ ಬೇರ್‍ಡ ಎಂಬ ವಿeನಿ. ಹೊಸದಾಗಿ ಆವಿಷ್ಕೃತಗೊಂಡ  ನಾನು ಆರಂಭದಲ್ಲಿ ಅಷ್ಟೊಂದು ಚತುರಮತಿಯಾಗಿರಲ್ಲಿ. ಕೇವಲ ಧ್ವನಿಯೊಂದನ್ನು ದೂರದಿಂದ ಕಳಿಸಿ ಕೇಳಿಸುತ್ತಿದ್ದ ನನ್ನ ಅಣ್ಣ ಆಕಾಶವಾಣಿ ಎನಿಸಿಕೊಂಡವ ಸಾರ್ವಭೌಮನಾಗಿ ಮೆರೆಯುತ್ತಿದ್ದಕಾಲದಲ್ಲಿ ನಾನು ಈ ಜಂಭೂದ್ವೀಪದ ಭರತಖಂಡದಲ್ಲಿ ೧೯೫೯ ರಲ್ಲಿ ಅಡಿಯಿಡಿಸಿದೆ. ವೈದೇಶೀಯ ವಿಷಯಗಳನ್ನೇ ಗೌರವಸುವ ಭಾರತೀಯರ ಮನಸ್ಸನ್ನು ಮುಟ್ಟುಗೋಲುಹಾಕುವಲ್ಲಿ ಅಂದಿನಿಂದ ಇಂದಿನವರಗೆ ಸಾಕಷ್ಟು ಯಶಸ್ವಿಯಾಗಿದ್ದೇನೆ. ಅಂದುಪೂರ್ಣಪ್ರಮಾಣದಲ್ಲಿ ಪಾಶ್ಚಾತ್ಯ ತನುಮನಗಳನ್ನು ಹೊಂದಿ ಇಲ್ಲಿಗೆ ಬಂದಿದ್ದರೂ ಇಂದು ನನ್ನೆಲ್ಲಾ ಅಂಗಾಂಗಗಳೂ ಈ ಹಿಂದುಸ್ಥಾನದಲ್ಲಿಯೇ ಸಿದ್ಧವಾಗಿ ಆಕಾರವಿಕಾರಗಳನ್ನು ಹೋದುತ್ತಿದ್ದೇನೆ. ಒಂದುಕಾಲದಲದಲಿ ಸಿರಿವಂತರ ಭೋಗದ ವಸ್ತುವೆನೆಸಿದ್ದ ನಾನು ಇಂದು ಪಾರ್ಥೇನಿಯಂ ಕಳೆಯನ್ನೂ ಮೀರಿಸಿ ಅರ್ಧಮನೆಯೀದ ಅರಮನೆಯವರೆಗೂ ವ್ಯಾಪಿಸಿದ್ದೇನೆ. ಹಳ್ಳಿಯ ಜೋಪಡಿಯಲ್ಲಿಯೂ ನನ್ನ ದರ್ಶನ ನಿಮಗೆ ಸಾಧ್ಯ. ಹಳ್ಲಿಯಲ್ಲಿಮೈಮುರಿದು ದುಡಿದು ದಣಿವ ರೈತನ ಮನಸಿಗೆ ಮುದನೀಡುವ  ಅತನ ಮಡದಿಗಿಂತಲೂ ನಾನೇ ಒಂದು ಕೈಮೇಲೆನಿಸಿಕೊಂಡಿದ್ದೇನೆ. ನಿರಂತರವಾಗಿ ಪರಿಶ್ರಮಿಸಿ ಕಾಯಕವೇಕೈಲಾಸ ಎಂದುಕೊಂಡಿರುವ ಹೈದರ ಕಾರ್ಯಗತಿಯನ್ನೇ ಬದಲಾಯಿಸಿದ್ದೇನೆ ಇಂದು ಹಳ್ಳಿಯ ಹೆಂಗೆಳೆಯರಲ್ಲ ಮನವಾರ್ತೆಯನ್ನು ಅರೆಬರೆ ಮಾಡಿನಡುದಿನದಲದಲ್ಲಿಯೂ ನನ್ನ ಮುಖದರ್ಶನ ಮಾಡುತ್ತಿದ್ದಾರೆ. ಇಷ್ಟುಸಾಲದೇ ಈ ದೇಶದ ಪ್ರಗತಿಗೆ?! ತವರನ್ನು ತೋರೆದ ಬಂದ ನನಗೆ ಅತ್ತೆಯಮನೆಯ ಉದ್ದಾರದ ಹಂಗಿಲ್ಲ. ಸಾಗರೋತ್ತರರು ನನನ್ನು ನಿರ್ಮಿಸಿದ್ದೇ ಈ ದೇಶ   ಸ್ವಾಂತಂತ್ರ್ಯ ಹೊಂದಿದರೂ ಗುಲಾಮಗಿರಿಯನ್ನು ತೊರೆಯದಿರಲೆಂದೇ. ಈ ದೃಷ್ಠಿಯಲ್ಲಿ ನಾನು ಸಂಪೂರ್ಣಯಶಸ್ವಿಯಾಗಿದ್ದೇನೆ. ಇನ್ನು ಓದುವ ಮಕ್ಕಳ ಪಾಡೋ ಹೇಳತೀರದು. ಕಿವಿಯಲ್ಲಿ ಗಾಳಿಸಿಕ್ಕಿದ ಎಳೆಗರುವಿಂತೆ ದಿಕ್ಕು ತಪ್ಪಿದವರಾಗಿದ್ದಾರೆ. ನಾನು ನೀಡುವ ವಿವಿಧ ಮನೋಮಾಲಿನ್ಯಕರ ಕಾರ್ಯಕ್ರಮಗಳನ್ನು ವೀಕ್ಷಿಸಿ ಓದುವದನ್ನು ಮರೆತಿದ್ದಾರೆ. ಕಾಟಾಚಾರದ ಓದನ್ನೂ ಇಷ್ಟದ ಊಟವನ್ನೂ ನನ್ನ ಎದುರಿನಲ್ಲಿಯೇ. ತವರಿನ ಬಳುವಳಿಯಾಗಿ ಈ ದೇಶದ ಸಂಸ್ಕೃತಿಯನ್ನು ಕೆಡಿಸುವ ವಾಹಿನಿಗಳನ್ನು ಪಡೆದಿದ್ದೇನೆ. ಆಕಾಶದಲ್ಲಿ ಸುತ್ತುತ್ತಿರುವ ಉಪಗೃಹವೆಂಬ ನನ್ನ ಚಿಕ್ಕಪ್ಪ, ನನ್ನ ಮುಖದಲ್ಲಿ ಮಿಂಚಬಲ್ಲಿರಂಗು ರಂಗೋಲಿಗಳನ್ನೆಲ್ಲಾ ತವರಿನಿಂದ ನನಗೆ ಕಳುಹಿಸುವ ದಲ್ಲಾಳಿ.  ಈ ದೇಶದ ಪ್ರಜೆಗಳೋ ತಾತ್ಕಾಲಿಕ ಸುಖಭೋಗಕ್ಕಾಗಿ ಎಲ್ಲವನ್ನು ಮರೆಯುವ ಮಹಾನುಭಾವರು !    ಔದ್ಯೋಗಿಕ ಕ್ಷೇತ್ರದಲ್ಲಿ ನನ್ನ ಕಾಲುಕೀಲುಗಳ ತಯಾರಿಕೆಯಲ್ಲಿ ಕ್ರಾಂತಿಯಾಗಿದೆ. ಹಲವಾರು ಕುಟುಂಬಗಳಿಗೆ ಜೀವನಾಧಾರವಾಗಿದೇನೆ. ಆದರೆ ಈ ಸ್ಪರ್ಧೆಯಲ್ಲಿ ದಿನದಿಂದ ನನ್ನ ಮಾರಾಟದ ಬೆಲೆ ಇಳಿಯುತ್ತಿದೆ. ಕಾಸಿಗೊಂದು ಕೊಸರಿಗೊಂದು ಸಿಗುವ ಕಾಲಬಂದೀತೇನೋ ಎಂದು ಭಯವಾಗುತ್ತಿದೆ.

         ಅದರೂ ನಾನು ಇಲ್ಲಿಯ ಜನತೆಗೆ ಒಳ್ಳೆಯದನ್ನೂ ನೀಡುತ್ತಿದ್ದೇನೆ. ಮಕ್ಕಳಿಗೆ ಓದಲು ಅನುಕೂಲಕ್ರ ಪರಿಕರಗಳನ್ನು ತೋರಿಸುತ್ತೇನೆ. ದೇಶವಿದೀಶಗಳ ವರ್ತಮಾನಗಳನ್ನು ಕೇಳಿಸಿ ತೋರಿಸುತ್ತೇನೆ. ಗೃಹಿಣಿಯರಿಗೆ ಗೃಹೋಪಕರಣಗಳ ಉಪಯೋಗಗಳ ವಿವರ ನೀಡುತ್ತೇನೆ. ವಿeನ ತಂತ್ರeನಗಳ ವಿತರಣೆ ಮಾಡುತ್ತೇನೆ.ಇತಿಹಾಸ ಪುರಾಣಗಳ ಮೆಲುಕು ಹಾಕಿಸುತ್ತೇನೆ.ಇಲ್ಲಿಯ ಸಂಸ್ಕೃತಿಯ ಪುನರುಜ್ಜೀವನ್ನಕ್ಕೆ ಸಹಕರಿಸುತ್ತೇನೆ. ಆದರು ಇಲ್ಲಿಯ ಜನ ಇದನ್ನು ಸ್ವೀಕರಿಸದೆ ಬೇಡಾದುದನ್ನೇ ಹೆಚ್ಚು ಬಯಸುತ್ತಾರೆ. ಹಿತಕರ ಕಾರ್ಯಕ್ರಮಗಳನ್ನು ಬಿಟ್ಟು ಇತರ ವಾಹಿನಿಗಳ ಮಸಾಲೆ ಮನರಂಜನೆಯನ್ನೇ ದಿನವಿಡೀ ಆಸ್ವಾದಿಸುತ್ತಾರೆ. ಹದಿಹರಯದ ಮಕ್ಕಳು ಹಾದಿ ತಪ್ಪುತ್ತಿದ್ದಾರೆ. ಪ್ರೇಮ ಕಾಮದ ಬಗ್ಗೆ ಸರಿಯಾದ ತಿಳುವಳಿಕೆಯಿಲ್ಲದ ವಯಸ್ಸಿನಲ್ಲಿ ನಾನು ನೀಡಿದ್ದೇ ಸರ್ವಸತ್ಯ ಎಂಬ ಭ್ರಮೆಯಲ್ಲಿ ಜೀವನ ಲಕ್ಷ್ಯತಪ್ಪುವಲ್ಲಿ ಗುರಿಮುಟ್ಟಿದ್ದಾರೆ.

               ನಾನೊಂದು ಸಾಗರದಂತೆ ಬೆಲೆಬಾಳುವ ಮುತ್ತುರತ್ನಗಳನ್ನೂ ಹೊಂದಿದ್ದೇನೆ. ಅಪಾಯಕಾರೀ ಅಷ್ಟಪಾದಿಗಳನ್ನೂ ತಿಮಿಂಗಲಗಳನ್ನೂ ಪಡೆದಿರುತ್ತೇನೆ. ಹಂಸಕ್ಷೀರ ನ್ಯಾಯದಂತೆ ವ್ಯವಹರಿಸಿದರೆ ಈ ಮನುಕುಲ  ಸಾದನೆಯ ಹಾದಿಯಲ್ಲಿ ನಡೆದೀತು ಇಲ್ಲದಿರೆ ವಿನಾಶದ ಅಂಚನ್ನು ಹೊಂದೀತು.  ನನ್ನ ಮುಖವೀಕ್ಷಕರೇ ನಿಮಗೊಂದು ಕಿವಿಮಾತು  ನಾನಂತೂ ನನ್ನ ಬುರುಡೆಗೆ ತೂರಿದ್ದೆಲ್ಲವನ್ನೂ ತೋರುತ್ತೇನೆ. ನವು ಹೇಗೆ ಕಿವಿಹಿಂಡುವಿರೋ ಹಾಗೆ ನಾನು. ಮುತ್ತನ್ನು ಎತ್ತುವಿರೋ ತಿಮಿಂಗಲದ ಬಾಯಾಹಾರವಾಗಿವಿರೋ ನೀವೇ ತೀರ್ಮಾನಿಸಿ. ಮುಂದುವರಿದ ವಿeನದ ಇತರ ಆವಿಷ್ಕಾರಗಳನ್ನು ಪ್ರಾಜ್ಞರು ಮನುಕುಲದ ಉದ್ದಾರಕ್ಕೆ ಬಳಸಿದಂತೆ ಭರತಮುನಿಯ ದೃಶ್ಯಕಾವ್ಯೋಪಾದಿಯಲ್ಲಿಧರೆಗಿಳಿದ ನನ್ನನ್ನು  ಮಾನವನ ಹಿತಕಾರಕನಾಗಿ ಉಳಿಸಿಕೊಳ್ಳಿರೆಂಬ ಅರಿಕೆಯೊಂದಿಗೆ

ತಮ್ಮ ಮನೆಯ ಮಧ್ಯಸ್ಥ

ದೂ.ದ. ಪೆಟ್ಟಿಗೆ.

Thursday, February 5, 2009

ಓಂ ನಮಃ ಶಿವಾಯ .


ಶಿವಂ ಶಂಕರಂ ಶಂಭುಮೀಶಾನಮೀಡೇ

Monday, January 26, 2009

ಮಧುಕರ ವೃತ್ತಿ ಎನ್ನದು


ಸ್ವಾರ್ಥಕ್ಕಾಗಿ ದುಂಬಿಗಳನ್ನು ಹೂವಿಂದ ಹೂವಿಗೆ ಅಲೆದರೂ
ಹೂವನ್ನು ಕೆಡಿಸದೆ ಉಪಕಾರಕ್ಕೆ ಪ್ರತ್ಯಪಕಾರ ಮಾಡುವವು ಪರಾಗಸ್ಪರ್ಶದಿಂದ
ಇವು ನಮಗೆ ಆದರ್ಶಗಳು.

Tuesday, January 13, 2009

ಯಾರಲ್ಲಿ ... ?


ಗುಮ್ಮನ ಕರೆಯದಿರೇ ಅಮ್ಮಾ....